Skip to main content

Harida Harigolu (Broken Oar)

Written by Amulya B
Language: Kannada

Approximate duration: 95 minutes


SYNOPSIS
What if you could be given a choice to not be born? Would you take it?

Voluntarily giving up on the chance to procreate, Dhatri lives on an island with an isolated population of anti-natalists, who have turned their back on life, by sterilizing themselves. When an unexplained pregnancy occurs, the already fragile lives of characters are thrown into disarray. Parallelly, a man-made river, carrying hundreds of dead rivulets inside her has also descended upon the island, in search of salvation. Memories and dreams haunt the characters creating an atmosphere where uncanny has become the norm.

The play is a response to the contemporary eco-anxiety when the most intelligent species of the earth cannot avert its eyes from the spectacle of its own destruction.

AN EXCERPT


[ರಂಗ ಇನ್ನೂ ಕತ್ತಲಲ್ಲಿರುವಾಗಲೇ ಯಾರೋ ಜೋರಾಗಿ ಉಸಿರಾಡುತ್ತಿರುವ ಸದ್ದು. ಜೊತೆ ಜೊತೆಗೆ ಟಿಕ್ ಟಿಕ್ ಎಂಬ ಗಡಿಯಾರದ ಸದ್ದು ಬರುತ್ತಿದೆ. ನಿಧಾನವಾಗಿ ರಂಗದ ಮೇಲೆ ಬೆಳಕು ಬರುತ್ತಿದ್ದಂತೆ, ರಂಗದ ಒಂದು ಬದಿ ಇರುವ ಮೇಜಿನ ಬಳಿ ಏನೋ ಗಹನವಾಗಿ ಮೇಣದ ಬತ್ತಿಯ ಬೆಳಕಲ್ಲಿ ಓದುತ್ತಾ ಅಲ್ಲೇ ನಿದ್ದೆ ಹೋದ ಒಬ್ಬ ಗಂಡಸು.

ರಂಗದ ಮಧ್ಯದಲ್ಲಿ ಒಂದು ಸೋಫಾ ಇದೆ. ಮತ್ತೊಂದು ಬದಿಯಲ್ಲಿ, ಒಂದು ಮಂಚದ ಮೇಲೆ, ಸೊಳ್ಳೆ ಪರದೆಯ ಅಡಿಯಲ್ಲಿ ಮಲಗಿರುವ ದೇಹವೊಂದು ಯಾವುದೋ ಕೆಟ್ಟ ಕನಸು ಕಾಣುತ್ತಿರುವಂತೆ ಅತ್ತಿಂದಿತ್ತ ಹೊರಳಾಡುತ್ತಿದೆ.

ಆಕೆಯ ಹಾಸಿಗೆಯ ಹಿಂದಿನ ಪರದೆಯ ಮೇಲೆ, ಹಲವಾರು ಆಕೃತಿಗಳು ಮಿಂಚಿ ಮಾಯವಾಗುತ್ತಿವೆ: ಎಂಟು ಕಾಲಿನ ಅಕ್ಟೋಪಸ್, ಎಲ್ಲಾ ದಿಕ್ಕಿನಲ್ಲಿಯೂ ತನ್ನ ರೆಂಬೆ-ಕೊಂಬೆಗಳನ್ನು ಚಾಚಿ ಅಸಾಧಾರಣವಾಗಿ, ದೈತ್ಯಾಕರವಾಗಿ ಬೆಳೆಯುತ್ತಿದೆ. ಮರಗಳಾಗಿ ಬದಲಾಗುತ್ತಿದೆ. ಆ ಮರಗಳು ಕಾಡುಗಳಾಗಿ ಬದಲಾಗಿ, ಮತ್ತಾವುದೋ ವಿಚಿತ್ರಾಕಾರಗಳನ್ನು ತಾಳಿ, ಮತ್ತೆ ಸಸಿಯಾಗಿ ಹುಟ್ಟಿ ಯಾವುದೋ ಪ್ರಾಣಿಯನ್ನು ತನ್ನ ರೆಂಬೆಕೊಂಬೆಗಳನ್ನು ಬಂಧಿಸಿ ಕೊಂದ ಹಾಗೆ...

ಒಮ್ಮೆಲೇ ಆಕೆ ಈ ಕನಸಿನಿಂದ ಎಚ್ಚರಗೊಳ್ಳುತ್ತಾಳೆ. ಪರದೆಯ ಮೇಲೆ ವಿವಿಧ ಭಂಗಿಗಳಲ್ಲಿ ಜೀವಜಾಲದ ಅನಂತತೆಯ ನರ್ತನದಲ್ಲಿ ತೊಡಗಿದ್ದ ಗಿಡ-ಮರ-ಪ್ರಾಣಿಪಕ್ಷಿಗಳೆಲವೂ ಮಾಯವಾಗುತ್ತವೆ.

ರೂಮಿನ ಹೊರಗೆ ಇಟ್ಟಿರುವ ಮಣ್ಣಿನ ಮಡಿಕೆಯಿಂದ ನೀರು ಕುಡಿಯುವಳು. ಹಾಗೆಯೇ ಮನೆಯ ಬಾಗಿಲಿನ ಬಳಿ ಹೋಗಿ ನಿಲ್ಲುವಳು. ಇನ್ನು ಸೂರ್ಯ ಹುಟ್ಟಿಲ್ಲ. ಆದರೂ ಬೆಳಗಿನ ಜಾವದ ಕಪ್ಪು-ಮಿಶ್ರಿತ ನೀಲಿ ಬೆಳಕು, ಆಕೆಯ ಮುಖದ ಮೇಲೆ ಬೀಳುವುದು. ಏನನ್ನೋ ನಿರೀಕ್ಷಿಸುತ್ತಿರುವಂತೆ ಹಾಗೇ ಆ ಬಾಗಿಲ ಬಳಿ ಕೆಲಕಾಲ ನಿಲ್ಲುವಳು. ಹಾಗೇ ವಾಪಸ್ಸು ಬಂದು ಧನಂಜಯನ ಬಳಿ ಹೋಗಿ ಮೆಲ್ಲಗೆ ಅವನ ತಲೆ ಕೂದಲನ್ನು ನೇವರಿಸುತ್ತಾಳೆ.]

ಧನಂಜಯ: [ಬೆಚ್ಚಿ ಬಿದ್ದು] ಓ ಧಾತ್ರಿ! ಒಂದು ಕ್ಷಣ ಎದೆ ಧಕ್ ಅಂದು ಬಿಡ್ತು

ಧಾತ್ರಿ: ಸಾರಿ, ಎಬ್ಬಿಸಿದಕ್ಕೆ.

ಧನಂಜಯ: ಪರ್ವಾಗಿಲ್ಲ, ನಾನು ಏಳುವವನೇ ಇದ್ದೆ.

[ತನ್ನ ಕುರ್ಚಿಗೆ ನೇತು ಹಾಕಿದ್ದ, ಟವಲ್ ಅನ್ನು ತೆಗೆದುಕೊಂಡು, ರಂಗದ ಹಿಂಬದಿಗೆ ಹೋಗಿ ಮುಖಕ್ಕೆ ನೀರು ಚಿಮುಕಿಸುವನು.]

ಧಾತ್ರಿ: ಇನ್ನೂ ಈಗ ತಾನೇ ಐದಾಯ್ತು ಅಷ್ಟೇ

ಧನಂಜಯ: ನಿನಗೇ ಗೊತ್ತಿದೆಯಲ್ಲ. ಟೂರಿಸ್ಟ್ ಗಳು ಬರುವವರಿದ್ದಾರೆ.

ಧಾತ್ರಿ: ಹೂಂ...

ಧನಂಜಯ: ನೀನ್ಯಾಕೆ ಎದ್ದಿರೋದು?

ಧಾತ್ರಿ: ಹೀಗೆ...

ಧನಂಜಯ: ನಿದ್ದೆ ಬರಲಿಲ್ಲವೇನು?

ಧಾತ್ರಿ: ಹಾಗೇನು ಇಲ್ಲ...

ಧನಂಜಯ: ಮತ್ತೆ ಹೋಗಿ ಬಾಗಿಲ ಬಳಿ ನಿಂತ್ಕೊಂಡು ರಾತ್ರಿ ಕಳೆದೆಯಾ ಹೇಗೆ

ಧಾತ್ರಿ: ಇಲ್ಲ ಜಯ. ನಿದ್ದೆ ಏನೋ ಬಂತು...

ಧನಂಜಯ: ಆದ್ರೆ?

ಧಾತ್ರಿ: ಆದ್ರೆ..

ಧನಂಜಯ: ಮತ್ತೆ ಅದೇ ಕನಸೇನು?

ಧಾತ್ರಿ: ಹೂಂ...ಆದರೆ ಈ ಬಾರಿ ನಿನ್ನೆಗಿಂತಲೂ ಸ್ಪಷ್ಟವಾಗಿತ್ತು ಕನಸು. ದಿನ ಕಳೀತಾ ಇದ್ದ ಹಾಗೆ, ಕವಿದಿದ್ದ ಮಂಜು, ಮೆತ್ತಗೆ ಚದುರ್ತಾ ಇದೆ ಅನಿಸುತ್ತೆ. ಎಲ್ಲಾ ಚದುರಿದ ಮೇಲೆ ಅಲ್ಲಿ ಉಳಿಯೋದಾದ್ರೂ ಏನೋ!

ಧನಂಜಯ: ಹಾಗಾದ್ರೆ, ನೀನು ನನಗೆ ಹೇಳಬಹುದು ಇವತ್ತು

ಧಾತ್ರಿ: ಯಾವುದರ ಬಗ್ಗೆ?

ಧನಂಜಯ: ನಿನ್ನ ಕನಸಿನ ಬಗ್ಗೆ. ಇವತ್ತು ಸ್ಪಷ್ಟವಾಗಿದೆ ಅಂತ ಹೇಳ್ತಾ ಇದ್ದೀಯಲ್ಲ.

ಧಾತ್ರಿ: ಹೌದು...ಆದರೆ

ಧನಂಜಯ: ನಿನ್ನ ಕನಸು ಅಂದ್ರೆ ಅಷ್ಟೊಂದು ಪರ್ಸನಲ್ಲಾ ಹೇಗೆ. ನನ್ನ ಬದಲು ಬೇರೆ ಯಾರೋ ನಿನ್ನ ಕನಸಿನಲ್ಲಿ ಬರತಾ ಇದ್ದಾರೋ ಹೇಗೆ.

ಧಾತ್ರಿ: ಏ ಸುಮ್ನಿರೋ. ನಿನಗೆ ಗೊತ್ತು ನನ್ನ ಕನಸಿನಲ್ಲಿ ನಿನ್ನಂತಹ ಮನುಷ್ಯರು ಯಾರೂ ಬರೋದಿಲ್ಲ ಅಂತಾ.

ಧನಂಜಯ: ಓ, ನನ್ನನ್ನ ಮನುಷ್ಯ ಅಂತಾ ಒಪ್ಪಿಕೂಂಡ್ಯಾ, ವೆರಿ ಗುಡ್.

ಧಾತ್ರಿ: ಏ ಜಯಾ... ಅಂದ್ರೆ... ನಾನು...ಏನೇನಾಯ್ತು ಅಂತಾ ಸೀನ್ ಗಳ ಹಾಗೆ ನಿನಗೆ ಹೇಳ್ತಾ ಬರಬಹುದು, ಆದರೆ ಆ ಕನಸಿನ ಅನುಭಾವವನ್ನ ನಿನಗೆ ಹೇಗೆ ಹೇಳಲೋ

ಧನಂಜಯ: ಹೇಳೋ ಮೊದಲೆಯೇ, ಸೋಲೊಪ್ಪಿಕೊಂಡ್ಯೋ ಹೇಗೆ. ಪ್ರಯತ್ನ ಪಡು. ಏನಾಯ್ತು ನಿನ್ನ ಕನಸಲ್ಲಿ?

[ಧಾತ್ರಿ ಮಾತನಾಡಲು ಶುರು ಮಾಡಿದಂತೆ, ರಂಗದ ಮೇಲಿನ ವಾತಾವರಣವು ನಿಧಾನವಾಗಿ ಬದಲಾಗುವುದು]

ಧಾತ್ರಿ: ಮೊದ ಮೊದಲು, ಬರೀ ಸ್ತಬ್ಧ ಚಿತ್ರಗಳು, ತುಣುಕುಗಳು ಮಾತ್ರ ನೆನಪಲ್ಲಿ ಇರ್ತಾ ಇದ್ದವು. ಯಾವುದೋ ಮನೆ ಅಗ್ನಿಯಲ್ಲಿ ನೆಲಸಮವಾದ ಹಾಗೆ. ಯಾವುದೋ ಹೂವು ಅರಳದೆ ಮುದುಡಿದ ಹಾಗೆ. ಸಮುದ್ರದ ಅಲೆಗಳು ದಡವನ್ನು ತಲುಪದ ಹಾಗೆ. ಚಂದಿರ ಸೂರ್ಯನಾಗಿ, ಸೂರ್ಯ ಚಂದಿರನಾಗಿ, ಇಡೀ ಭೂಮಂಡಲವನ್ನು ನುಂಗಿದ ಹಾಗೆ. ಆಮೇಲೆ ಇಡೀ ಪ್ರಾಣಿ ವರ್ಗವೇ ಸಸ್ಯಗಳಾಗಿ ಬದಲಾದ ಹಾಗೆ. ಸಸ್ಯಗಳು ಮರವಾಗಿ, ಹೆಮ್ಮರವಾಗಿ ಇಡೀ ಭೂಮಂಡಲವನ್ನೇ ನುಂಗಿದ ಹಾಗೆ.
ಸ್ವತಂತ್ರವಾಗಿ ನೋಡಿದ್ರೆ ಈ ತುಣುಕುಗಳಿಗೆ ತಮ್ಮದೇ ಆದ ಯಾವುದೇ ಅರ್ಥ ಇಲ್ಲ. ಆದರೆ ಅವುಗಳನ್ನ ಒಟ್ಟಾಗಿ ನೋಡಿದ್ರೆ, ಯಾವುದೋ ಒಂದು ದೊಡ್ಡದಾದ ಅರ್ಥನೇ ಸಿಗಬಹುದು ಅಂತಾ ನನ್ನ ಮನಸ್ಸು ಹೇಳುತ್ತೆ. ಆದರೆ ಈಗ ಎದ್ದ ಮೇಲೆ ನೋಡಿದ್ರೆ, ಎಲ್ಲಾ ಸಿಲ್ಲಿ ಅನಿಸುತ್ತೆ.

ಧನಂಜಯ: ಇಲ್ಲಪ್ಪ, ನನಗೇನೂ ಸಿಲ್ಲಿ ಅನ್ಸಲ್ಲ

ಧಾತ್ರಿ: ನಿಜ ಹೇಳು

ಧನಂಜಯ: ನನಗನಿಸುತ್ತೆ, ನೀನು ಊಟ ಸರಿ ಮಾಡಲಿಲ್ಲ ಅಂತಾ. ಅದೇ ನಿನ್ನ ಕನಸಲ್ಲಿ ಬಂದಿದೆ. ನಿನ್ನ ಹೊಟ್ಟೆಯಲ್ಲಿ ಆಗ್ತಾ ಇದ್ಯಲ್ಲ ಆ ಜೀರ್ಣ ಕ್ರಿಯೆ, ಎನ್ ಜೈಮ್ಸ್ ಗಳು ಒಡೆಯೋದು, ಪದಾರ್ಥಗಳು ರೂಪಾಂತರಗೊಂಡು ಕೊನೆಗೆ....

[ಜೋರಾಗಿ ನಗು]

ಧಾತ್ರಿ: ಇದಕ್ಕೆ..ಇದಕ್ಕೆ ನಾನು ನಿನಗೆ ನನ್ನ ಕನಸುಗಳ ಬಗ್ಗೆ ಹೇಳೋದಿಲ್ಲ. ನಿನಗೆ ಹೊತ್ತಾಗ್ತಾ ಇದೆ ತಾನೇ, ಹೋಗು. 

ಧನಂಜಯ: ಆಯ್ತು ಮಾರಾಯ್ತಿ. ಸಾರಿ. ಕ್ಷಮಿಸಿ ಬಿಡು ನನ್ನ ಈ ದ್ವೀಪದಲ್ಲಿ ಬಂದ ಮೇಲೆ ಜನ ಹ್ಯೂಮರ್ ಕಳೆದುಕೊಂಡ್ರೋ ಅಥವಾ ಹ್ಯೂಮರ್ ಇಲ್ಲದೇ ಇರೋರೆ ಇಲ್ಲಿಗೆ ಬಂದ್ರೋ [ಧಾತ್ರಿಯ ಕೆಂಗಣ್ಣಿಗೆ ಹೆದರಿ] ಓಕೆ...ಓಕೆ... ಧಾತ್ರಿ... ಕನಸು ಅಂದರೆ ಹಾಗೇ ಅಲ್ವೇನೆ? ಎಲ್ಲವು ಬಿಡಿ ಬಿಡಿಯಾಗೆ ಕಾಣೋದು... ಸಣ್ಣ ಸಣ್ಣ ಕಣಗಳಂತೆ...ಪೂರ್ತಿ ಚಿತ್ರವಂತೂ ಕಣ್ಣಿಗೆ ಕಾಣೋದಿಲ್ಲ.. ಇನ್ನು ಎದ್ದ ಮೇಲಂತೂ ಎಲ್ಲ ಮರೆತುಹೋಗಿಬಿಡ್ತದೆ... 

ಧಾತ್ರಿ: ಹೌದೋ... ನಿದ್ದೆ ಮತ್ತು ಎಚ್ಚರದ ಕ್ಷಣಗಳಲ್ಲಿ ಇನ್ನೆಷ್ಟನ್ನು ಕಳೆದುಕೊಂಡೆನೋ... ಆದರೆ ನಿನ್ನೆ ಕನಸು ಇತ್ತಲ್ಲ. ಅದು ಈ ರೀತಿಯ ಟಿಪಿಕಲ್ ತುಣುಕುಗಳಾಗಿ ಬರಲಿಲ್ಲ. ಯಾವುದೋ ಒಂದು ಮಹಾಕಥೆಯ ಸಣ್ಣದೊಂದು ಭಾಗವೇ ಬಂದ ಹಾಗಿತ್ತು. ಒಂದು ಘಟನೆಯ ನಂತರ ಇನ್ನೊಂದು, ಮತ್ತೊಂದು, ಮತ್ತೆ ಆ ಘಟನೆಯ ಬೆನ್ನ ಹಿಂದೆಯೇ ಕಾಲಾನುಕ್ರಮವಾಗೆ ಬಂತು, ಗೊತ್ತಾ? ಯಾವುದೋ ಒಂದು ಹಾರದ ಸಣ್ಣ ಸಣ್ಣ ಮುತ್ತುಗಳನ್ನು ಮುತುವರ್ಜಿಯಿಂದ ಪೋಣಿಸಿದ ಹಾಗೆ. 
ಮೊದಲು ಬರ್ತಾ ಇದ್ದಾ ಕನಸುಗಳೆಲ್ಲಾ ನನಗೆ ಪುಟಗಳೆಲ್ಲ ಅದಲು ಬದಲಾಗಿರೋ ಪುಸ್ತಕದ ಮಧ್ಯೆ ಸಿಕ್ಕಿಹಾಕಿಕೊಂಡಿರುವ ಅನುಭವ ಕೊಡ್ತಾ ಇತ್ತು. ಈಗ....

ಧನಂಜಯ: ಈಗ?

ಧಾತ್ರಿ: ಈಗ...? ಈಗ...ಈಗ ಸಹ.. ಅರ್ಥವಾಗುತ್ತೆ ನನಗೆ. ಯಾವುದಾದ ಮೇಲೆ ಯಾವುದು ಬರುತ್ತೆ ಅಂತಾ. ಆದರೂ ಮೊದಲು ಎಷ್ಟು ಗೊಂದಲದಲ್ಲಿದ್ನೋ ಈಗಲೂ ಅಷ್ಟೇ ಗೊಂದಲದಲ್ಲಿದ್ದೇನೆ.

ಧನಂಜಯ: ಅಷ್ಟೇ ಏನು?

ಧಾತ್ರಿ: ಏನು ಅಷ್ಟೇ?

ಧನಂಜಯ: ಕನಸಿನಲ್ಲಿ...ಅಷ್ಟೇ ಏನು?

ಧಾತ್ರಿ: ಓ! ಆಮೇಲೆ ನಾನು ಇದ್ದಕ್ಕಿದ್ದಂತೆ, ಯಾವುದೋ ಒಂದು ಕಾಡಿನಲ್ಲಿ ನಡೆದು ಹೋಗ್ತಾ ಇದ್ದೇನೆ. ಯಾವ ಕಾಡು ಅಂತಾ ಗೊತ್ತಿಲ್ಲ. ಆದರೆ ಅದು ನನಗೆ ಪರಿಚಿತವಿರೋ ಜಾಗ. ಅಲ್ಲಿ ಕಾಲಿಟ್ಟ ತಕ್ಷಣ ನನ್ನ ಇಡೀ ದೇಹ ಜುಂ ಅಂದಿತು! ಬಹುಶಃ ಅದು ನನ್ನೂರಿನ ಕಾಡೇ ಇರಬೇಕು ಜಯ!

ಧನಂಜಯ: ನಿನಗೆ ಹೇಗೆ ಗೊತ್ತಯ್ತು, ಅದು ನಿನ್ನೂರಿದ್ದೇ ಕಾಡು ಅಂತಾ?

ಧಾತ್ರಿ: ವಾಸನೆಯಿಂದ.

ಧನಂಜಯ: ವಾಸನೆಯಿಂದ?

ಧಾತ್ರಿ: ಹೌದು...ಪ್ರತಿಯೊಂದು ಕಾಡಿಗೂ ತನ್ನದೇ ಆದ ವಾಸನೆ ಇರುತ್ತೆ ಅಲ್ವೇನೊ? ನೆಲದಲ್ಲಿ ಬಿದ್ದು ಕೊಳೆಯುತ್ತಿರುವ ಆ ಜಾಗಕ್ಕೆ ಮಾತ್ರ ಸೀಮಿತವಾಗಿರುವ ವಿವಿಧ ಜಾತಿಯ ಮರಗಿಡಗಳು, ಆ ನೆಲದಲ್ಲೇ ಹೇರಳವಾಗಿ ಸಿಗುವ ಸೂಕ್ಷ್ಮ- ಅತಿಸೂಕ್ಷ್ಮಜೀವಿಗಳು, ಇವೆಲ್ಲವೂ ಸೇರಿ ಆ ಕಾಡು ತನ್ನದೇ ಆದ ವಿಶಿಷ್ಟವಾದ ವಾಸನೆಯನ್ನು ಹೊರಡಿಸುತ್ತೆ ಅಲ್ವಾ? ಅದಕ್ಕೆ ನನಗೆ ಗೊತ್ತಾಗಿದ್ದು. ಕನಸಿನಲ್ಲಿ ನನ್ನ ಮೂಗಿಗೆ ಹೊಡೀತಲ್ಲಾ ಅದು ನಮ್ಮೀ ದ್ವೀಪದ ಕಾಡಿನ ವಾಸನೆ ಆಗಿರಲಿಲ್ಲ ಅಂತಾ. ಅದು ನಮ್ಮೂರಿನ ಕಾಡಿನ ವಾಸನೆಯೇ.

ಧನಂಜಯ: ನಮ್ಮಂತ ಬಯಲುಸೀಮೆಯವರಿಗೆ ಇದೆಲ್ಲ ಗೊತ್ತೆ ಆಗಲ್ಲ. ನಮ್ಮಲ್ಲಿ ಮರಗಿಡಗಳು ಸೀಸನ್ ಗೆ ತಕ್ಕ ಹಾಗೆ ಬದಲಾಗ್ತಾ ಇರ್ತವೆ. ನಿಮ್ಮ ಊರಿನ ತರಾ ಸದಾ ಜೀವಂತವಾಗಿರಲ್ಲ.

ಧಾತ್ರಿ: ಹೀಗೆ ನಾನು ಇದೇ ಕಾಡಿನಲ್ಲಿ ನಡೆದು ಹೋಗ್ತಾ ಇದ್ದೇನೆ.ಕಾಲಿಗೆ ಮುಳ್ಳುಗಳು ಚುಚ್ತಾ ಇವೆ. ಇಂಬಳಗಳು ಮುತ್ತುತ್ತಾ ಇವೆ. ಆದರೆ ಇದ್ದಕ್ಕಿದ್ದಂತೆ, ಇಡೀ ಕಾಡಿಗೆ ಕಾಡೇ ಬುಡಕಿತ್ತು ಪಕ್ಕಕ್ಕೆ ಸರಿದು ನನಗೆ ದಾರಿ ಮಾಡಿ ಕೊಡ್ತಾ ಇವೆ. ಕಾಲುಗಳ ಮೇಲೆ ಮುತ್ತುತ್ತಿದ್ದ ರಕ್ತಪಿಪಾಸುಗಳೆಲ್ಲವು ದರದರನೆ ಇಳಿದು ನೆಲದೊಳಗೆ ಹುಗಿದು ಹೋಗುತ್ತಿವೆ. ನಾನು ಇಲ್ಲಿವರೆಗೂ ಎಲ್ಲೂ ನೋಡದಂತಹ, ಕೇಳದಂತಹ ಪಕ್ಷಿಗಳೆಲ್ಲವೂ ಯಾವುದೋ ಒಂದು ಸುಂದರವಾದ ಹಾಡನ್ನ ಹಾಡ್ತಾ ಇವೆ. ನಾನು ಹಾಗೇ ನಡೀತಾನೇ ಇದ್ದೇನೆ. ಯಾವುದೇ ಅಡೆತಡೆಗಳು ಸಿಕ್ತಾ ಇಲ್ಲ. ನಾನು ನಡೀತಾ ಇರೋ ಎರಡೂ ಬದಿ ನಿಂತಿರುವ ಕಾಡುಪ್ರಾಣಿಗಳೆಲ್ಲವೂ ನನ್ನನ್ನೇ ದಿಟ್ಟಿಸಿ ನೋಡ್ತಾ ಇವೆ. ಅವುಗಳ ದೃಷ್ಟಿಯನ್ನ ನನಗೆ ಎದುರಿಸಲಾಗ್ತಾ ಇಲ್ಲ. ನಾನೇನೋ ತಪ್ಪು ಮಾಡಿದ್ದೇನೆ ಅಂತಾ ನನಗನಿಸ್ತಾ ಇದೆ. ಆದರು ಮುಂದೆ ಹೋಗ್ತಾ ಇದ್ದೇನೆ. ಇದ್ದಕ್ಕಿದ್ದಂತೆ ಪಯಸ್ವಿನಿ ನದಿ ಅಲ್ಲಿ ಪ್ರತ್ಯಕ್ಷವಾಗಿದೆ॒.

ಧನಂಜಯ: ನಿಮ್ಮೂರಿನ ಪಯಸ್ವಿನಿಯೇನು? ಆದರೆ ಅದು...

ಧಾತ್ರಿ: ....ಸತ್ತು ಹೋಗಿದೆ. ದಕ್ಷಿಣ ಗಂಗೆಯಂತಹ ಬೃಹತ್ ಯೋಜನೆಗೆ ಪಯಸ್ವಿನಿಯಂತಹ ಪುಟ್ಟ ಪುಟ್ಟ ನದಿಗಳನ್ನು ಬಲಿ ಕೊಡಲೇ ಬೇಕಲ್ಲೇನು? 

ಧನಂಜಯ: ಹೌದು, ಆದರೆ ನಮ್ಮಂತ ಬರಡು ನೆಲದಲ್ಲಿ ಬದುಕಿರೋರಿಗೆ ಹೊಸದೊಂದು ಜೀವ ಸೆಲೆಯೇ ಸಿಕ್ದಾಗಯ್ತು ಗೊತ್ತಾ? ಬರೀ ಮಳೆಯ ಮೇಲೆ ಡಿಪೆಂಡ್ ಆಗಿದ್ದ ಎಷ್ಟೋ ರೈತರು ಬದುಕು ಕಟ್ಕೊಂಡರು 

ಧಾತ್ರಿ: ಹೌದು. ಬದುಕು ಕಟ್ಕೊಂಡ್ರಿ – ನಮ್ಮ ಜನರ ಹೆಣಗಳ ಮೇಲೆ

ಧನಂಜಯ: ಬೇಡ ಧಾತ್ರಿ.

ಧಾತ್ರಿ: ಏನು ಬೇಡ?

ಧನಂಜಯ: ನಾವು ನಮ್ಮ ಭೂತಕಾಲದ ಬಗ್ಗೆ ಮಾತಾಡೋ ಅಗತ್ಯ ಇಲ್ಲ. ಅದು ಯಾಕೋ ಈ ದ್ವೀಪಕ್ಕೆ ರುಚಿಸೋದಿಲ್ಲ.

ಧಾತ್ರಿ: ಇದೆಂಥದಿದು ಮೂಢನಂಬಿಕೆ?

ಧನಂಜಯ: ಕೆಡಕು ಅನ್ನೋದು ಹೊರಗಡೆ ಇಂದಾನೇ ಬರಬೇಕು ಅಂತಾ ಇಲ್ಲ. ನಮ್ಮೊಳಗೆ ಸಾಕಷ್ಟು ಇವೆ.

ಧಾತ್ರಿ: ನನಗೇನು ಅನಿಸ್ತಾ ಇದೆ ಅನ್ನೋದನ್ನ ನಾನು ಬಾಯಿಬಿಟ್ಟು ಸಹ ಹೇಳಬಾರದೇನು?

ಧನಂಜಯ: ಧಾತ್ರಿ, ನಾವು ಆ ಬದುಕನ್ನ ಬಿಟ್ಟು ಬಂದು ಆಯ್ತು. ಆ ಜಗತ್ತನ್ನ ಬಿಟ್ಟು ಬಂದದ್ದಾಯ್ತು. ನಮಗೂ ಅದಕ್ಕೂ ಇನ್ನು ಸಂಬಂಧ ಇಲ್ಲ. ಆ ನೆಲದ ಬಗ್ಗೆ ಯೋಚನೆ ಮಾಡಿ ಯಾವ ಪ್ರಯೋಜನವೂ ಇಲ್ಲ. ಅದು ನಮಗೆ ಗುರುತು ಹತ್ತದೇ ಇರುವಷ್ಟು ಬದಲಾಗಿ ಬಿಟ್ಟಿದೆ. ಈಗೇನಾದರೂ ಬೈ ಚಾನ್ಸ್ ಅಲ್ಲಿಗೆ ವಾಪಸ್ಸು ಹೋದರೆ, ನಾವು ನಮಗೇ ಅಪರಿಚಿತರಾಗಿಬಿಡ್ತೇವೆ. ಅದು ನಮ್ಮೂರಲ್ಲ. ನಾವು ಒಮ್ಮೆ ಅಲ್ಲಿಂದ ಕಾಲು ಹೊರಗಿಟ್ಟು, ಈ ದ್ವೀಪವನ್ನ ಆಯ್ಕೆ ಮಾಡಿದ ಕ್ಷಣದಿಂದಲೇ ಆ ಜಗತ್ತು ಸತ್ತು ಹೋಯಿತು. ಇನ್ನು ನಿನ್ನ ನದಿಗಳು, ಕಾಡು, ಮನೆ ಅವೆಲ್ಲವು ಅದಕ್ಕಿಂತ ಮುಂಚೆಯೇ ಸತ್ತು ಹೋದವು

ಧಾತ್ರಿ: ಹೊರ ಜಗತ್ತಿಗೆ ಅವು ಸತ್ತು ಹೋಗಿರ ಬಹುದು. ಆದರೆ ನನ್ನೊಳಗೆ ಅವು ಜೀವಂತವಾಗಿವೆ ಅಲ್ವೇನು?

ಧನಂಜಯ: ಇನ್ನೇನಾಯಿತು?

ಧಾತ್ರಿ: ಎಲ್ಲಿ?

ಧನಂಜಯ: ಕನಸಿನಲ್ಲಿ. ಪಯಸ್ವಿನಿ ಕಂಡಿತು...ಆಮೇಲೆ?

ಧಾತ್ರಿ: ಈಗ ನಾವು ನೆನಪುಗಳ ಬಗ್ಗೆ ಮಾತಾಡಬಹುದೇನು?

ಧನಂಜಯ: ಆದರೆ, ಇದು ನೆನಪಲ್ಲ ಕಣೆ, ಇದು ನಿನ್ನ ಕನಸು

[ಬಾಗಿಲು ತಟ್ಟಿದಂತಹ ಸದ್ದು. ಇಬ್ಬರೂ ಒಮ್ಮೆಲೆ ಬಾಗಿಲಿನ ಕಡೆ ನೋಡುವರು.]

ಯಾವುದೋ ಕಾಡು ಪ್ರಾಣಿ

ಧಾತ್ರಿ: ಹೂಂ

ಧನಂಜಯ: ಬರುತ್ತೆ, ನೀನೇನು ಯೋಚನೆ ಮಾಡಬೇಡ.

ಧಾತ್ರಿ: ಹೂಂ...

ಧನಂಜಯ: ಮತ್ತೆ?

ಧಾತ್ರಿ: ಮತ್ತೆ?

ಧನಂಜಯ: ಕನಸು?

ಧಾತ್ರಿ: ಓ! ಹಾಗೇ ನೋಡ ನೋಡ್ತಾ ಇದ್ದ ಹಾಗೆ ಪಯಸ್ವಿನಿ ದಕ್ಷಿಣಗಂಗೆಯಾಗಿ ಬದಲಾಗ್ತಾಳೆ. ನಾನು ಎಂದೂ ಕಣ್ಣಾರೆ ಕಾಣದೆ ಇರೋ ನದಿ ನನ್ನ ಕನಸಿನೊಳಗೆ ಬಂದದ್ದಾದರೂ ಹೇಗೆ ಅಂತಾ. ಆ ದಕ್ಷಿಣ ಗಂಗೆ ಮಧ್ಯದಲಿ ಸೀಳುವಾಗ, ನನಗಿದು ನೆನಪಾಯ್ತು –, ಹೆದರಿಕೆಯಿಂದ ಎದ್ದು ಬಿಟ್ಟೆ.

ಧನಂಜಯ: ಅಂದರೆ ನೀನು ಕನಸಿನಿಂದ ಬೆಚ್ಚಿ ಬೀಳಲಿಲ್ಲ. ಕನಸಿನ ಸಾಧ್ಯಾಸಾಧ್ಯದ ಜಿಜ್ನಾಸೆಯೊಳಗೆ ಬಿದ್ದು ಎಚ್ಚರವಾದೆ.

[ಜೋರ‍ಾಗಿ ನಗುವನು]

ಧಾತ್ರಿ: ನೀನು ಯಾವಾಗ ನೋಡಿದ್ರೂ ಹೀಗೆ. ನಾನು ನಿನಗೆ ಹೇಳಿದ್ದೆ ತಪ್ಪಾಯ್ತು.

ಧನಂಜಯ: ಆಮೇಲೆ?

ಧಾತ್ರಿ: ಆಮೇಲೆ?

ಧನಂಜಯ:

ಆಮೇಲೆ ನದಿ ಸೀಳಿ ನಿನಗೆ ಜಾಗ ಮಾಡಿಕೊಡ್ತೇನು? ವಸುದೇವ ಹೇಗೆ ತನ್ನ ತಲೆ ಮೇಲೆ ಕೃಷ್ಣನನ್ನ ಎತ್ತಿಕೊಂಡು ಹೋದ್ನೋ ಹಾಗೆ ನೀನು ನಿನ್ನ ಹೊಟ್ಟೆಯಲ್ಲಿ...

[ಮತ್ತೆ ಬಾಗಿಲು ತಟ್ಟಿದ ಸದ್ದು]

ಇಷ್ಟು ಬೆಳಿಗ್ಗೆ ಯಾರೂ ಬರೋದಿಲ್ಲ.

ಧಾತ್ರಿ: ನನಗೆ ಗೊತ್ತಿದೆ. ಆದರೂ...

ಧನಂಜಯ: ನಾವು ಅವರಿಗೆ ಹೇಳ ಬೇಕಾದನ್ನ ಹೇಳಿದ್ದೇವೆ

ಧಾತ್ರಿ: ಲೆಟರ್ ಅಲ್ಲಿ ಹೇಳಿದ್ಯಾ ತಾನೇ ನೀನು, ಬಯಾಲಾಜಿಕಲಿ ನಮಗೆ ಮಗು ಆಗೋಕ್ಕೆ ಸಾಧ್ಯವೇ ಇಲ್ಲ – ಯಾಕಂದ್ರೆ ನಾವು ಸ್ಟೆರಿಲೈಜ್ ಮಾಡಿಕೊಂಡಿದ್ದೇವೆ ಅಂತಾ. ನೀನು ಹೇಳಿದ್ಯಾ ಅಲ್ವಾ

ಧನಂಜಯ: ಧಾತ್ರಿ – ನೀನು ಓದಿದೆ ತಾನೇ ಆ ಲೆಟರ್ ಅನ್ನ

ಧಾತ್ರಿ: ಹೌದು...ಆದರೆ ಅವರಿಗೆ ಅರ್ಥ ಆಗಲಿಲ್ಲ ಅಂದರೆ, ನಾವೂ ಸ್ಟೆರಿಲೈಜ್ ಆದ ಬಗ್ಗೆ ಸುಳ್ಳು ಹೇಳ್ತಾ ಇದ್ದೀವಿ ಅನ್ಕೊಂಡ್ರೆ

ಧನಂಜಯ: ಹಾಗಾಕ್ಕೆ ಸಾಧ್ಯ ಇಲ್ಲ. ಮೈನ್ ಲ್ಯಾಂಡ್ ನವರತ್ರ ಎಲ್ಲದಕ್ಕೂ ರೆಕಾರ್ಡ್ ಇರುತ್ತೆ. ಇದು ನಿನಗೇ ಗೊತ್ತಿರುವಂತದ್ದು ಅಲ್ವಾ. ಅವರಿಗೆ ಗೊತ್ತಿದೆ. ಈ ಪ್ರೆಗ್ನೆನ್ಸಿ ವೈಜ್ನಾನಿಕವಾಗಿ ಸಾಧ್ಯವಾಗ ಬಾರದಿತ್ತು, ಆದರೆ ಆಗಿದೆ ಅಂತಾ.

ಧಾತ್ರಿ: ಹಾಗಾದರೆ ಅಬಾರ್ಷನ್ ಗೆ ಅನುಮತಿ ಕೊಡಬಹುದು ಅಂತಿಯಾ

ಧನಂಜಯ: ಮತ್ತಿನ್ನೇನು? ತಂದೆ-ತಾಯಿಯಾಗೋಕೆ ತಯಾರಿಲ್ಲ ಅನ್ನೋರ‍ ಹತ್ತಿರ, ಒತ್ತಾಯಪೂರ್ವಕವಾಗಿ ಮಗು ಹೆಡಿಸ್ತಾರೇನು? ಅದೂ ಅವರೇ ನಮಗೆ ಈ ದ್ವೀಪದಲ್ಲಿ ನಿಮ್ಮ ನಂಬಿಕೆಗಳಿಗೆ ತಕ್ಕಂತೆ ಬದುಕಿ ಅಂತಾ ಬಿಟ್ಟುಕೊಟ್ಟ ಮೇಲೆ?

ಧಾತ್ರಿ: ಹೌದು... ಆದರೂ ನನಗೆ ಭಯವಾಗುತ್ತೆ. ಅಷ್ಟು ದೊಡ್ಡ ದೇಶ ಅದು – ಎಲ್ಲರೂ ೫ ಮಕ್ಕಳನ್ನಾದರೂ ಹೆಡಿಲೇ ಬೇಕು ಅಂತಾ ಆದೇಶ ಹೊರಡಿಸಿ, ಅದನ್ನು ಯಶಸ್ವಿಯಾಗಿ ಜಾರಿಗೆ ತಂದಂತಹ ಜನ ಇವರು – ಕೆಲವೊಮ್ಮೆ ನನಗೆ ಆಶ್ಚರ್ಯ ಆಗುತ್ತೆ. ನಮ್ಮಂತಹ ಜನರನ್ನ ಹೇಗೆ ಇವರು ಸುಮ್ಮನೆ ದ್ವೀಪದಲ್ಲಿ ಹಾಕಿ ಬಿಟ್ಟು ಬಿಟ್ಟಿದ್ದಾರೆ ಅಂತಾ

ಧನಂಜಯ: ನಮ್ಮಂತಹ ಜನ ಅಂದ್ರೆ

ಧಾತ್ರಿ: ನಮ್ಮಂತಹ ಜನ ಅಂದ್ರೆ – ಅದೇ – ಹೊಸ ಜೀವಗಳನ್ನ, ಮಕ್ಕಳನ್ನ ಈ ಭೂಮಿ ಮೇಲೆ ತರೋದು ತಪ್ಪು ಅಂತಾ ನಂಬಿರೋರು

ಧನಂಜಯ: ನಾವು ನಮ್ಮನ್ನ ನಾವೇ ಅಬ್ ನಾರ್ಮಲ್ ಅಂತಾ ನೋಡಿದರೆ, ಬೇರೆಯವರು ತಾನೇ ನಮ್ಮನ್ನ ನಾರ್ಮಲ್ ಅಂತಾ ನೋಡಕ್ಕೆ ಹೇಗೆ ಸಾಧ್ಯ

ಧಾತ್ರಿ: ನನ್ನನ್ನ ನಾನು ಅಬ್ ನಾರ್ಮಲ್ ಅನ್ನೋ ದೃಷ್ಟಿಯಲ್ಲಿ ನೋಡಲ್ಲ ಜಯಾ. ಆದರೆ ಬೇರೆಯವರು ನಮ್ಮನ್ನ ನೋಡೋ ದೃಷ್ಟಿ ನನ್ನ ಐಡೆಂಟಿಟಿ ಮೇಲೆ ಪರಿಣಾಮ ಬೀರದೆ ಇರುತ್ತದೆ ಏನು?

ಧನಂಜಯ: ಅದಕ್ಕೆ ನಾವು ನಮ್ಮದೇ ರೀತಿಯ ನಂಬಿಕೆ ಉಳ್ಳ ಜನರ ಮಧ್ಯೆ ಇರ್ತಾ ಇರೋದು ತಾನೇ

ಧಾತ್ರಿ: ಹೌದು. ಆದರೆ ಅವರಿಗೆ ಈ ನನ್ನ ಪ್ರೆಗ್ನೆನ್ಸಿ ವಿಷಯ ಗೊತ್ತಾದರೆ, ಇಲ್ಲಿಗೂ ಎಲ್ಲಿಗೂ ಸಲ್ಲದವಳಾಗಿ ಬಿಡ್ತೇನೆ ಅಷ್ಟೇ

ಧನಂಜಯ: ಹಾಗೆಲ್ಲ ಏನೂ ಆಗಲ್ಲ. ಇಲ್ಲಿರುವವರೆಲ್ಲ ನಮ್ಮವರೇ. ಸುಮ್ಮನೆ ಹೆದರಬೇಡ. ನನಗೆ ಹೊತ್ತಾಯ್ತು. ನೀನು ಹೋಗಿ ವಾಪಸ್ಸು ಮಲಗಿಕೋ

[ಧಾತ್ರಿ ನಿಂತಲ್ಲೇ ನಿಂತಿರುವವಳು]

ಧನಂಜಯ: ಯಾಕೆ ಧಾತ್ರಿ, ನಿದ್ದೆ ಬರುವುದಿಲ್ಲ ಅಂತಾ ಹೆದರಿಕೆಯೇನು?

ಧಾತ್ರಿ: ಕನಸುಗಳು... ಅವು ನನ್ನದಲ್ಲ ಅನ್ಸುತ್ತೆ. ಯಾರದೋ ನಿದ್ದೆಗೆ ಇನ್ನಾರದೋ ಕನಸು ಬಿದ್ರೆ, ನಿದ್ದೆ ಮಾಡೋದಾದ್ರೂ ಹೇಗೆ?

[ಹೊರಡಲು ಅಣಿಯಾಗ್ತಾ ಇದ್ದವನು, ಹಾಗೇ ನಿಲ್ಲುವನು]

ಇಲ್ಲ ನಿನಗೆ ಹೊತ್ತಾಯ್ತು...ಹೋಗು...

ಧನಂಜಯ: ಪರ್ವಾಗಿಲ್ಲ. ನನಗಿನ್ನೂ ಸಮಯ ಇದೆ.

ಧಾತ್ರಿ: ನನಗೆ ಕೆಲವೊಮ್ಮೆ... ಇದು ನನ್ನದಲ್ಲ – ನಮ್ಮದಲ್ಲ- ಯಾವುದೋ ಏನೋ ಬಂದು ನನ್ನ ಹೊಟ್ಟೆಯನ್ನ ಆಕ್ರಮಿಸಿ – ಮತ್ತೆ ಈ ಕನಸುಗಳು...

ಧನಂಜಯ: ಹೇ ಇಲ್ನೋಡು. ನಿನ್ನ ನಿದ್ದೆಯಲ್ಲಿ ಬೇರೆ ಯಾರದೋ ಕನಸು ಬೀಳಕ್ಕೆ ನಾನು ಬಿಡೋದಿಲ್ಲ ಗೊತ್ತಾಯ್ತೇನು? ಇನ್ನು ನಿನಗೆ ಕನಸೇ ಬೀಳ್ದೇ ಇದ್ದರೆ. ನನ್ನ ಕನಸನ್ನ ನಿನಗೆ ಕೊಡ್ತೇನೆ.

[ಧನಂಜಯ ಪುಸ್ತಕ ಹಿಡಿದು ಸೋಫಾದ ಮೇಲೆ ಕುಳಿತುಕೊಂಡು, ಧಾತ್ರಿಯ ತಲೆಯನ್ನು ತನ್ನ ತೊಡೆಯ ಮೇಲೆ ಇರಿಸಿ, ಓದಲು ಶುರು ಮಾಡುವನು]

“ಓ ನನ್ನ ತಂದೆಯೇ ದಯವಿಟ್ಟು ಕೇಳು” ಎಂದು ಬೇಡಿದಳಾಕೆ
“ಪ್ರಕೃತಿಯ ಮೇಲೆ ನದಿಗಳಿಗೆ ನಿಜವಾಗಿಯೂ ಪ್ರಭುತ್ವವಿದೆಯಂತಾದರೆ
ಜನರ ಕಣ್ಣಿಗೆ ಚುಚ್ಚುವ ನನ್ನೀ ರೂಪವನ್ನು ಬದಲಿಸು”
ಆ ವಾಕ್ಯ ಮುಗಿಯುವ ಮೊದಲೇ ಭಾರವಾಯಿತೆ ಆಕೆಯ ದೇಹ
ತೊಗಟೆಯ ಪದರಗಳಿಂದ ಸುತ್ತುವರೆಯಿತೆ ಆಕೆಯ ಎದೆ
ಕೂದಲು ಎಲೆಗಳಾಗಿ ಬದಲಾಗಿ
ಕೈಗಳು ಕೊಂಬೆಯಾದವು.
ಕಾಲುಗಳು ಬೇರುಗಳಾದವು,
ತಲೆಯು ಮರದ ನೆತ್ತಿಯಾಯಿತು.
ಕೊನೆಗೆ ಉಳಿದದ್ದು ಮಾತ್ರ ಆಕೆಯ ಸೌಂದರ್ಯ ಮಾತ್ರ”







ABOUT AMULYA
Much like the characters in her play, Amulya is caught between multiple worlds of her own making. A postgraduate in Cultural Studies, her day job involves producing videos for a legacy newspaper in Bengaluru. She has had stints with multiple Kannada theatre troupes like Vijayanagara Bimba, Abhinaya Taranga, Benaka, Rangasiri, Ninasam etc. and doesn’t remember a time when she was not associated with theatre in some form. 

To contact Amulya, please email amulya.blr27@gmail.com

ABOUT THE PROGRAMME

For someone who primarily accessed theatre either through European texts or performative sensibilities of Kannada theatre, introduced me to new modes of theatre practice and theatre making. Through this course I was exposed to bold experiments in contemporary theatre to which I had no previous access to.
I was especially struck by how my notions and ideas on writing were challenged in the course. As a writer, I have always valued spontaneity and intuitiveness more than the craft. It was a revelation to witness how setting up some rules can be good for you as well as your play.
The importance of balancing structure with the spontaneous is a skill I will be spending the rest of my life honing.
Rules and structure do not hinder my process, after all! It did alter the way I look at the pedagogy of creative writing.
The structured nature of the programme was especially effective. The close examination of each of the elements that make up a play was microscopic, but not reductive and contributed to our own writing.
As the course progressed, it was a joy to see seven independent plays come to life gradually through discussions and exchanges of ideas. It makes me happy thinking that in each of the seven plays, there may be certain things, whose presence can only be attributed to the collective contribution of the cohort.

Acknowledgements
- To Vijayanagara Bimba. You taught me about life through theatre. I don’t think I would have had the childhood I had without you. Whatever I am today, a huge part belongs to the Bimba family
- To Pallavi MD. Thank you for your guidance and support in making this play what it is today.
- To Abhishek Majumdar. Your patience and kindness is something I will always remember. Thank you for the constant nudges to be better. Thank you for helping me realise the potential of my ideas. If at all they have come through, it is because of you.
- To Vivek Madan. You gave us a space for learning, where the seed of this play grew into a giant tree. Thank you for the unlimited cups of chai and stuffed fridge.
- To classmates and TAs. Your feedback has been instrumental in shaping this play.
- To Bhasha Centre. For giving me an opportunity to be part of this course.
- To Rumah and DH. A day job in the news media is filled with uncertainties. Yet, twice a week you let me go to attend the classes, without fail. I will always be grateful to you for the kindness you showed me.
- To Amma and Pallu. My first reader and first translator, respectively. Thank you.


Amulya

Comments

Popular posts from this blog

Nerkku Ner: Face to Face

Written by Neeraja MR Language: Malayalam Approximate duration: 90 minutes Synopsis: Ever since Smitha heard her sister, Malini and her husband Krishnan are coming home, she has not been able to sleep well. Nightmares haunt her as her parents, Janaki and Sumesh prepare for a feast to welcome the couple. What is disturbing Smitha that she cannot confide in her family and why? Her father, a theyyam artist is fighting his health to prepare for what could be one of his last theyyam performances. Will faith help him endure the performance? As human beings are left to grapple with the stark realities of life, Muchilottu Bhagavthy, a Theyyam Goddess has to deal with a new opponent in her dwelling, a shadow from her past, a burnt body of a woman. Will she be able to make peace with her past? What stories are told and not told? What does it take to tell a story? What does it mean to be a Goddess? What is sacred? An Excerpt -------------------------------------------------- Excerpt...